ಅಖ್ತರ್ ಹುಸೇನ್

ದಾರಿ ತೋರಿದವ-
ನಭಿಮನ್ಯುವಲ್ಲ
ಅಖ್ತರ್ ಹುಸೇನ
ಈತ ಒಳ ನುಗ್ಗಿದಂತೆ
ಹೊರ ಬರಬಲ್ಲ-
ನಾದರೂ ಬೇಕೆಂದೆ
ಒಳಗೇ ಉಳಿದಿರುವನು
ಎಷ್ಟೋ ಕಾಲದಿಂದ

ಸಂದಿಗೊಂದಿಯ ಹಾದು
ಕತ್ತಲಿಗೆಡವಿ
ಗೋಡೆಗಳ ತಡವಿ
ಅಂತೂ ಹೊರಬಂದೆವು
ಬಚಾವೆಂದು ನೋಡಿದರೆ
ಅಲ್ಲಿ ಮತ್ತವನೆ
ಅಖ್ತರ್ ಹುಸೇನ
ಯಾರು ಎಲ್ಲಿಗೂ
ಹೋದುದಿಲ್ಲ ಎಂಬ
ತಿಳಿಗೊಳದ ನಗೆ
ಅವನ ಮುಖದ ಮೇಲೆ

ಇಚ್ಛಾ ಮರಣಿ
ಬೇಕೆಂದಾಗ
ಸಾಯಬಲ್ಲವನಿಗೆ
ಮರಣದ ಭಯವಿಲ್ಲ
ಮಂಡಿಯೂರಿ
ಕಂಬಳಿ ನೇಯುತ್ತಾನೆ
ಇವನ ಪ್ರಾರ್ಥನೆಯಲ್ಲಿ
ನಮ್ಮ ಸೇರಿಸುತ್ತಾನೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲೆಕ್ಕ ಹಾಕಿಲ್ಲ ಎಷ್ಟು?
Next post ಸನ್ಮಾನ

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

cheap jordans|wholesale air max|wholesale jordans|wholesale jewelry|wholesale jerseys